ಚಿಕ್ಕಮಗಳೂರು : ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಬಳಕೆ ನಂತರ ಸಿ.ಟಿ ರವಿ ಗ್ರಹಚಾರ ಯಡವಟ್ಟುಗಳ ಸರಮಾಲೆಯಾಗಿ ಪರಿಣಮಿಸಿದಂತೆ ಗೋಚರಿಸುತ್ತಿದೆ. ಪೊಲೀಸರ ಬಂಧನದ ನಂತರ ತಲೆಗೆ ಬಿದ್ದ ಪೆಟ್ಟು, ತವರಿಗೆ ವಾಪಸ್ ಆದ ದಿನ ಆಂಬುಲೆನ್ಸ್ ದುರ್ಬಳಕೆ,, ಭದ್ರತೆಗಾಗಿ ಎಸ್ಕಾರ್ಟ್ ಪಡೆದಿದ್ದ ವಿಷಯಗಳ ಜೊತೆಗೆ ಇದೀಗ ಕಾರ್ಯಕರ್ತರ ಅದ್ದೂರಿ ಸ್ವಾಗತದ ವೇಳೆ ಸಿ.ಟಿ ರವಿ ಮನೆ ಎದುರು ಕುಸಿದು ಬಿದ್ದ ಡ್ರೋನ್ ಛಾಯಾಗ್ರಾಹಕನ ಸಾವು ಹೊಸ ಸೇರ್ಪಡೆಯಾಗಿದೆ.
ಸಿ.ಟಿ ರವಿ ಕಳೆದ ಶನಿವಾರ ನಗರಕ್ಕೆ ಆಗಮಿಸಿದ ವೇಳೆ ರಾತ್ರಿಯಿಡೀ ಮೆರವಣಿಗೆ ನಡೆದಿತ್ತು ಈ ವೇಳೆ ಖಾಸಗಿ ವಾಹಿನಿಯ ಐ.ಬಿ ವಾಹನದ ಮೇಲಿಂದ ಬಿದ್ದಿದ್ದ ಡ್ರೋನ್ ಛಾಯಾಗ್ರಾಹಕ ಅವಿನಾಶ್ ಇಂದು ಸಾವನ್ನಪ್ಪಿದ್ದಾನೆ.
ಕಳೆದೊಂದು ವಾರದಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಅವಿನಾಶ್ ಇಂದು ಕೊನೆಯುಸಿರೆಳೆದಿದ್ದಾನೆ.
ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿಗೆ ಸ್ವಾಗತ ಕೋರುವ ದಿನ ಲೈವ್ ವಾಹನದ ಮೇಲಿಂದ ಬಿದ್ದಿದ್ದ
ಅವಿನಾಶ್ (26) ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬೆಳಗಾವಿಯಲ್ಲಿ ಬಂಧನದ ಬಳಿಕ ಬಿಡುಗಡೆಯಾಗಿ ಕಳೆದ ಶನಿವಾರ ಚಿಕ್ಕಮಗಳೂರಿಗೆ ಬಂದಿದ್ದ ಸಿ.ಟಿ.ರವಿ ಸುದ್ದಿ ಪ್ರಸಾರಕ್ಕೆ ಅಂದು ಖಾಸಗಿ ಚಾನಲ್ ವಾಹನದ ಮೇಲೆ ನಿಂತು ಡ್ರೋನ್ ಹಾರಿಸುತ್ತಿದ್ದ ಅವಿನಾಶ್ ಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿತ್ತು, ಬಸವನಹಳ್ಳಿ ಮುಖ್ಯ ರಸ್ತೆಯ ಸಿ.ಟಿ ರವಿ ಮನೆ ಎದುರು ನಿಲ್ಲಿಸಿದ್ದ ವಾಹನದ ಮೇಲಿಂದ ಬಿದ್ದಿದ್ದ ಅವಿನಾಶ್ ನನ್ನು ಕೂಡಲೇ ಕೆ.ಆರ್.ಎಸ್. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಸಿ.ಟಿ ರವಿ ಕೂಡ ಆಸ್ಪತ್ರೆಗೆ ಹೋಗಿ ಅವಿನಾಶ್ ಆರೋಗ್ಯ ವಿಚಾರಿಸಿದ್ರು
ಚಿಕಿತ್ಸೆಗಾಗಿ ಶಿವಮೊಗ್ಗ, ಮೈಸೂರು, ಬೆಂಗಳೂರಿಗೆ ಆತನನ್ನು ರವಾನೆ ಮಾಡಲಾಗಿತ್ತು, ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗಿದೆ ಅವಿನಾಶ್ ಸಾವನ್ನಪ್ಪಿದ್ದಾನೆ.
Leave a comment