Home Crime News ಡ್ರೋನ್ ಅವಿ ಸಾವು : ಸಿ.ಟಿ ರವಿಗೆ ಯಡವಟ್ಟುಗಳ ಸೂಚನೆ ನಾ ?
Crime News

ಡ್ರೋನ್ ಅವಿ ಸಾವು : ಸಿ.ಟಿ ರವಿಗೆ ಯಡವಟ್ಟುಗಳ ಸೂಚನೆ ನಾ ?

Share
Share

ಚಿಕ್ಕಮಗಳೂರು : ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಬಳಕೆ ನಂತರ ಸಿ.ಟಿ ರವಿ ಗ್ರಹಚಾರ ಯಡವಟ್ಟುಗಳ ಸರಮಾಲೆಯಾಗಿ ಪರಿಣಮಿಸಿದಂತೆ ಗೋಚರಿಸುತ್ತಿದೆ. ಪೊಲೀಸರ ಬಂಧನದ ನಂತರ ತಲೆಗೆ ಬಿದ್ದ ಪೆಟ್ಟು, ತವರಿಗೆ ವಾಪಸ್ ಆದ ದಿನ ಆಂಬುಲೆನ್ಸ್ ದುರ್ಬಳಕೆ,, ಭದ್ರತೆಗಾಗಿ ಎಸ್ಕಾರ್ಟ್ ಪಡೆದಿದ್ದ ವಿಷಯಗಳ ಜೊತೆಗೆ ಇದೀಗ ಕಾರ್ಯಕರ್ತರ ಅದ್ದೂರಿ ಸ್ವಾಗತದ ವೇಳೆ ಸಿ.ಟಿ ರವಿ ಮನೆ ಎದುರು ಕುಸಿದು ಬಿದ್ದ ಡ್ರೋನ್ ಛಾಯಾಗ್ರಾಹಕನ ಸಾವು ಹೊಸ ಸೇರ್ಪಡೆಯಾಗಿದೆ.

ಸಿ.ಟಿ ರವಿ ಕಳೆದ ಶನಿವಾರ ನಗರಕ್ಕೆ ಆಗಮಿಸಿದ ವೇಳೆ ರಾತ್ರಿಯಿಡೀ ಮೆರವಣಿಗೆ ನಡೆದಿತ್ತು ಈ ವೇಳೆ ಖಾಸಗಿ ವಾಹಿನಿಯ ಐ.ಬಿ ವಾಹನದ ಮೇಲಿಂದ ಬಿದ್ದಿದ್ದ ಡ್ರೋನ್ ಛಾಯಾಗ್ರಾಹಕ ಅವಿನಾಶ್ ಇಂದು ಸಾವನ್ನಪ್ಪಿದ್ದಾನೆ.
ಕಳೆದೊಂದು ವಾರದಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಅವಿನಾಶ್ ಇಂದು ಕೊನೆಯುಸಿರೆಳೆದಿದ್ದಾನೆ.

ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿಗೆ ಸ್ವಾಗತ ಕೋರುವ ದಿನ ಲೈವ್ ವಾಹನದ ಮೇಲಿಂದ ಬಿದ್ದಿದ್ದ
ಅವಿನಾಶ್ (26) ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬೆಳಗಾವಿಯಲ್ಲಿ ಬಂಧನದ ಬಳಿಕ ಬಿಡುಗಡೆಯಾಗಿ ಕಳೆದ ಶನಿವಾರ ಚಿಕ್ಕಮಗಳೂರಿಗೆ ಬಂದಿದ್ದ ಸಿ.ಟಿ.ರವಿ ಸುದ್ದಿ ಪ್ರಸಾರಕ್ಕೆ ಅಂದು ಖಾಸಗಿ ಚಾನಲ್ ವಾಹನದ ಮೇಲೆ ನಿಂತು ಡ್ರೋನ್ ಹಾರಿಸುತ್ತಿದ್ದ ಅವಿನಾಶ್ ಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿತ್ತು, ಬಸವನಹಳ್ಳಿ ಮುಖ್ಯ ರಸ್ತೆಯ ಸಿ.ಟಿ ರವಿ ಮನೆ ಎದುರು ನಿಲ್ಲಿಸಿದ್ದ ವಾಹನದ ಮೇಲಿಂದ ಬಿದ್ದಿದ್ದ ಅವಿನಾಶ್ ನನ್ನು ಕೂಡಲೇ ಕೆ.ಆರ್.ಎಸ್. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಸಿ.ಟಿ ರವಿ ಕೂಡ ಆಸ್ಪತ್ರೆಗೆ ಹೋಗಿ ಅವಿನಾಶ್ ಆರೋಗ್ಯ ವಿಚಾರಿಸಿದ್ರು
ಚಿಕಿತ್ಸೆಗಾಗಿ ಶಿವಮೊಗ್ಗ, ಮೈಸೂರು, ಬೆಂಗಳೂರಿಗೆ ಆತನನ್ನು ರವಾನೆ ಮಾಡಲಾಗಿತ್ತು, ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗಿದೆ ಅವಿನಾಶ್ ಸಾವನ್ನಪ್ಪಿದ್ದಾನೆ.

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...

ಎಮ್ಮೆದೊಡ್ಡಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ವೃದ್ಧನ ಸಾವು

ಕಡೂರು: ತಾಲ್ಲೂಕಿನ ಎಮ್ಮೆದೊಡ್ಡಿ ರಸ್ತೆಯ ಕರಿಯಮ್ಮ ದೇವಸ್ಥಾನದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟ...

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...