Home namma chikmagalur ತರೀಕೆರೆ ಕ್ಷೇತ್ರದಲ್ಲಿ ಇಲಿ-ಬೆಕ್ಕು ಕಣ್ಣಾ ಮುಚ್ಚಾಲೆ
namma chikmagalurHomeLatest NewsTarikere

ತರೀಕೆರೆ ಕ್ಷೇತ್ರದಲ್ಲಿ ಇಲಿ-ಬೆಕ್ಕು ಕಣ್ಣಾ ಮುಚ್ಚಾಲೆ

Share
Share

ತರೀಕೆರೆ: ತರೀಕೆರೆ ಕ್ಷೇತ್ರದಲ್ಲಿ ಕಂತು,ಕಂತು ದಂಧೆಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದಿದೆ .ಇದಕ್ಕೆ ಸಾಕ್ಷಿ ಎಂಬಂತೆ 2023 ರಲ್ಲಿ ರೆಕಾರ್ಡ್ ಮಾಡಿದ ವಿಡಿಯೋ ಹರಿದಾಡುತ್ತಿದೆ.

ಲಿಂಗದಹಳ್ಳಿ ಸಮೀಪದಲ್ಲಿ ಇರುವ ಹಬ್ಬೆ ಫಾಲ್ಸ್ ನೋಡಲು ಪ್ರವಾಸಿಗರು ಬರುತ್ತಾರೆ. ಇವರನ್ನು ಕರೆದುಕೊಂಡು ಹೋಗಲು ಸ್ಥಳೀಯ ಪಿಕಪ್ ವಾಹನಗಳನ್ನು ಬಿಡಲಾಗಿದೆ.ವಾಹನಗಳ ಮಾಲೀಕರು ಹಲವರಿಗೆ ಮಾಮೂಲಿ ನೀಡುತ್ತಿರುವುದು ಬಹಿರಂಗ ಸತ್ಯ.ಹಲವು ವರ್ಷಗಳಿಂದ ಈ ದಂಧೆ ನಡೆಯುತ್ತಿದೆ.ಇದರಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಶಾಸಕರು ಮಾಮೂಲಿ ಪಡೆಯುತ್ತಾರೆ ಎಂಬ ಸುದ್ದಿ ಗುಟ್ಟಾಗಿ ಉಳಿದಿಲ್ಲ.

ತರೀಕೆರೆ ಗ್ಯಾರಂಟಿ ಯೋಜನೆಯ ಅಧ್ಯಕ್ಷ ರಮೇಶ್ ಎಂಬಾತನ ಜೊತೆ ಬಾಬು ನಾಯ್ಕ ಮಾತನಾಡಿರುವ ವೀಡಿಯೋದಲ್ಲಿ ಶಾಸಕ ಶ್ರೀನಿವಾಸ್ ಮತ್ತು ಅಕ್ಕಾ ನ ಬಗ್ಗೆ ಮಾತನಾಡಿರುವುದು ವೈರಲ್ ಆಗಿದೆ.ಆದು 2023 ರಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಎಂದು ನಾಯ್ಕ ಹೇಳಿದ್ದು ನಿನ್ನೆ ಮತ್ತೊಂದು ವಿಡಿಯೋದಲ್ಲಿ ವಾಹನಗಳ ಮೇಲೆ ಸಾಲ ತೀರಿಸಲು ಮಾತನಾಡಿದ್ದು ಎಂದು ಹೇಳಿದ್ದಾನೆ.ಈತ ಹೇಳಿರುವುದು ಸತ್ಯ ಯಾವುದು ಎಂಬದು ಗೊತ್ತಾಗ ಬೇಕು ಇಲ್ಲ ಇಲ್ಲಿನ ಜನರ ಕಿವಿಗೆ ಹೂವು ಇಡುವ ಕೆಲಸ ಎಂದು ಹೇಳಬೇಕಾಗುತ್ತದೆ.

ನಿನ್ನೆ ಇಡೀ ದಿನ ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಏನು ನಡೆದಿದೆ ಮಹೇಂದ್ರ ಎಂಬುವನನ್ನು ಕೂರಿಸಿದ್ದು ಏಕೆ ? ಎರಡು ವಿಡಿಯೋದಲ್ಲಿ ಮಾತನಾಡಿರುವ ಬಾಬು ನಾಯ್ಕನ ಪಾತ್ರವೇನು? ಯಾರಿಂದ ಒತ್ತಡವಿದೆ ಎಂಬುದನ್ನು ಬಹಿರಂಗ ಪಡಿಸಲು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

ಪಾಪ ಭ್ರಷ್ಟಾಚಾರವೇ ಗೊತ್ತಿಲ್ಲದ ಜನರನ್ನು ಬೀದಿಗೆ ತಂದಿದ್ದು ಏಕೆ ? ಇದನ್ನು ಕೇಳಿದ ಜನ ನಗಬಾರದ ಜಾಗದಲ್ಲಿ ನಗೆಯಾಡುತ್ತಿದ್ದಾರೆ.ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಗುಡ್ಡೆ ಪಂಚಾಯತಿ ಬಗ್ಗೆ ಠಾಣಧಿಕಾರಿ ಕತೆ ಹೇಳುತ್ತಾರೆ. ಜೊತೆಗೆ ಯಾವ ದೂರು ಬಂದಿಲ್ಲ ಎನ್ನುತ್ತಾರೆ. ಆಗದರೆ ಮಹೇಂದ್ರ ಎಂಬುವನನ್ನು ಠಾಣೆಯಲ್ಲಿ ಕರೆದು ಕೂರಿಸಿದ್ದು ಏಕೆ ?ಯಾರ ಒತ್ತಡ ಇತ್ತು ? ಅಧಿಕಾರಸ್ಥರ ಕೈ ಗೊಂಬೆಯಂತೆ ವರ್ತಿಸುವ ಪೊಲೀಸ್ ರ ನಡವಳಿಕೆ ಬಗ್ಗೆ ಸಾರ್ವಜನಿಕರು ಸಂಶಯ ಪಡುವಂತೆ ಆಗಿದೆ.

ಲಿಂಗದಹಳ್ಳಿ ಸುತ್ತ ಮುತ್ತ ನಡೆಯುತ್ತಿರುವ ದಂಧೆಗಳು ಹಲವು ಹಬ್ಬೆ ಫಾಲ್ಸ್ ದಂಧೆಯ ಜೊತೆಗೆ ಕೆಮ್ಮಣ್ಣುಗುಂಡಿ ಜಂಗಲ್ ರೆಸಾರ್ಟ್,ಹೋಮ್ ಸ್ಟೇಗಳಲ್ಲಿ ಆಕ್ರಮವಾಗಿ ನಡೆಯುವ ದಂಧೆಗಳಿಗೆ ಯಾರ ಕುಮ್ಮಕ್ಕು ಇದೆ.ತಣಗೆಬೈಲು ಸಮೀಪ ವಿ ಐ ಎಸ್ ಎಲ್ ಜಾಗ ಸಮತಟ್ಟು ಮಾಡಿ ಜನರಿಂದ ಮೂವತ್ತರಿಂದ ಐವತ್ತು ಸಾವಿರ ಹಣ ವಸೂಲಿ ಮಾಡಿರುವುದು ಯಾರು ? ಆಕ್ರಮ ಮರ ಸಾಗಣೆ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಇನ್ನೂ ಪಟ್ಟಿ ಮಾಡುತ್ತಾ ಹೋದರೆ ಇದು ಜಂಗಲ್ ಆಡಳಿತ ಎನ್ನಬೇಕು .

Cat and mouse in Tarikere area

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಮಳೆಯ ಆರ್ಭಟ – ಕಾಫಿಬೆಳೆ ನಾಶ – ರಸ್ತೆ ಹುಡುಕಾಡುವ ಕಾಟ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿದೆ ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಮಳೆಯ ಆರ್ಭಟದಿಂದ ಕಾಫಿ ಕೊಳೆಯಲು ಆರಂಭವಾಗಿದೆ ಎಂದು ಕಾಫಿ ಬೆಳೆಗಾರರ...

12ನೇ ಶತಮಾನದಲ್ಲೇ ಕನ್ನಡಕ್ಕೆ ವಚನಾಕಾರಿಂದ ಬಹಳ ದೊಡ್ಡ ಕೊಡುಗೆ

ಚಿಕ್ಕಮಗಳೂರು: ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು ೧೨ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರು ಕೊಟ್ಟ ಸಾಂಸ್ಕೃತಿಕ ಚಳುವಳಿ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ...

Related Articles

ದೊಡ್ಡ ಮನೆ ಡಿಚ್ಚಿ ಯಾರಿಗೆ – ಕೈ ಕಸರತ್ತು ? ಬಿಜೆಪಿಯಲ್ಲಿ ತಳಮಳ !

ಅಜ್ಜಂಪುರ: ಪಟ್ಟಣ ಪಂಚಾಯತಿ ಚುನಾವಣೆ ನಡೆದು ಇಪ್ಪತ್ತು ದಿನಗಳಾಗಿದೆ ಆದರೆ ಅಧ್ಯಕ್ಷ/ ಉಪಾಧ್ಯಕ್ಷರ ಚುನಾವಣೆ ವಿಳಂಬ...

ಜನರಿಗೆ ವಾಸ್ತವ ಸಂಗತಿ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾದ್ಯಂತ ಪ್ರವಾಸ

ಚಿಕ್ಕಮಗಳೂರು : ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ನೀಡುತ್ತಿರುವ ಜನಪರ ಯೋಜನೆಗಳ ಪ್ರಚಾರ ಕೈಗೊಳ್ಳುವುದರೊಂದಿಗೆ ವಿರೋಧ...

ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು

ಚಿಕ್ಕಮಗಳೂರು: ‘ಅಲ್ಲಂಪುರ ನಿವಾಸಿ ಓಂಕಾರಮೂರ್ತಿ ಮೇಲಿನ ಹಲ್ಲೆ ಸಂಬಂಧ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ‘ಬಿ’...

ಅಂಬೇಡ್ಕರ್ ಸಂವಿಧಾನದ ತತ್ವ ಹೊಂದಿರುವ ಪಕ್ಷ ಕಾಂಗ್ರೆಸ್

ಚಿಕ್ಕಮಗಳೂರು:  ಅಂಬೇಡ್ಕರ್ ಸಂವಿಧಾನದ ತತ್ವವನ್ನು ಹೊಂದಿರುವ ಪಕ್ಷ ಕಾಂ ಗ್ರೆಸ್. ಚುನಾವಣೆಗೆ ಮಾತ್ರ ಪಕ್ಷ ಸೀಮಿತವಾಗದೇ...