Home namma chikmagalur ಫೋಟೋ-ವಿಡಿಯೋಗ್ರಫಿ ಕೆನಾನ್ ಕ್ಯಾಮಾರಗಳು ಶ್ರೇಷ್ಠ
namma chikmagalurchikamagalurHomeLatest News

ಫೋಟೋ-ವಿಡಿಯೋಗ್ರಫಿ ಕೆನಾನ್ ಕ್ಯಾಮಾರಗಳು ಶ್ರೇಷ್ಠ

Share
Share

ಚಿಕ್ಕಮಗಳೂರು:  ಪೋಟೋಗ್ರಫಿ ಮತ್ತು ವೀಡಿಯೋಗ್ರಫಿ ಕ್ಷೇತ್ರದಲ್ಲಿ ಹೊಸ ಆಯಾಮ ವನ್ನು ಸೃಷ್ಟಿಸುವ ಕೆನಾನ್ ಕ್ಯಾಮರಾಗಳು ಛಾಯಾಗ್ರಾಹಕರ ಅನುಕೂಲತೆಗೆ ತಕ್ಕಂತೆ ಬಹಳಷ್ಟು ತಂತ್ರಾಂಶ ವನ್ನು ಅಡಕಗೊಳಿಸಲಾಗಿದೆ ಎಂದು ಕೆನಾನ್ ಕ್ಯಾಮಾರಾ ಕಂಪನಿ ತರಬೇತಿದಾರ ನಾಗೇಶ್ ಹೇಳಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಚಿಕ್ಕಮಗಳೂರು ಛಾಯಾಗ್ರಾಹಕರ ಸಂಘದಿಂದ ಗುರುವಾರ ಏರ್ಪಡಿಸಿ ದ್ಧ ‘ಕೆನಾನ್’ ಕಂಪನಿಯ ಕ್ಯಾಮಾರಾಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಹೊಸ ವಿಧಾನಗಳು ಇತರೆ ಕ್ಯಾಮರಾಗಳಿಗಿಂತ ವಿಭಿನ್ನ ರೀತಿಯ ಲ್ಲಿ ಕೆನಾನ್ ಕ್ಯಾಮಾರಾದಲ್ಲಿ ಅಳವಡಿಸಿದೆ. ಈ ತಂತ್ರಜ್ಞಾನವಳು ಮದುವೆ ಜೊತೆಗೆ ಸಿನಿಪೋಟೋ ಹಾಗೂ ವೀಡೀಯೋಗ್ರಫಿಗೆ ಪೂರಕವಾಗಿದ್ದು ಲೆನ್ಸ್‌ಗಳು ಕೂಡಾ ಗುಣಮಟ್ಟತೆಯಿಂದ ಕೂಡಿವೆ ಎಂದರು.

ಪ್ರಸಕ್ತ ಸಾಲಿನಲ್ಲಿ ಕೆನಾನ್ ಕಂಪನಿಯ ಕ್ಯಾಮಾರಾಗಳು ಛಾಯಾಗ್ರಾಹಕರ ವೃತ್ತಿ ಬದುಕಿನಲ್ಲಿ ಅನೇಕ ಸಮಯವನ್ನು ಉಳಿಸುವ ಶಕ್ತಿ ಹೊಂದಿದೆ. ಎಡಿಟಿಂಗ್ ಕೆಲಸ, ಕಲರ್ ಪಿಕ್ಸಿಂಗ್ ಸೇರಿದಂತೆ ಗಂಟೆಗಟ್ಟಲೇ ಯ ಹೆಚ್ಚು ಸಮಯವನ್ನು ಕ್ಯಾಮಾರಗಳ ಸೆಟ್ಟಿಂಗ್‌ನಿಂದಲೇ ಉಳಿಸುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಸಿನಿಮಾ, ಧಾರವಾಹಿ ಕ್ಷೇತ್ರಗಳಲ್ಲಿ ಕೆನಾನ್ ಕಂಪನಿಯ ಕ್ಯಾಮರಾಗಳು ಬಳಕೆಯಾಗುತ್ತಿದೆ. ಕೆಲವರು ಕ್ಯಾಮಾರಾ ಬಗ್ಗೆ ಸುಳ್ಳುಸುದ್ದಿಗಳು ಹರಡುತ್ತಿದ್ದು ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ಎಲ್ಲವೂ ಗುಣ ಮಟ್ಟ ಹಾಗೂ ತಂತ್ರಜ್ಞಾನದಿಂದ ಕೂಡಿದ ಕಾರಣ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಅತಿಹೆಚ್ಚು ಕೆನಾ ನ್ ಕ್ಯಾಮಾರಾ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.

ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನದೀಮ್ ಪಾಷ ಮಾತನಾಡಿ ಮಲೆನಾಡು ಭಾಗ ವಿಪರೀತ ಮಳೆ ಯಾಗುವ ಪ್ರದೇಶ. ಈ ಜಾಗದಲ್ಲಿ ಛಾಯಾಚಿತ್ರಣ ಬಹುದೊಡ್ಡ ಕೆಲಸವಾದ ಕಾರಣ ಛಾಯಾಗ್ರಾಹಕರಿಗೆ ಅನುಕೂಲವಾಗಲು ಕೆನಾನ್ ಕಂಪನಿ ತರಬೇತಿದಾರರಿಂದ ಕಾರ್ಯಾಗಾರ ಹಮ್ಮಿಕೊಂಡು ಕ್ಯಾಮಾರದ ವಿ ಶೇಷತೆ ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಕೆನಾನ್ ಕಂಪನಿ ತರಬೇತುದಾರ ಯಲ್ಲಪ್ಪ ಪಾಟೀಲ್ ಮಾಡೆಲ್‌ನೊಂದಿಗೆ ಕೆನಾನ್ ಕ್ಯಾ ಮಾರಗಳ ವಿಶೇಷತೆಯನ್ನು ಛಾಯಾಗ್ರಾಹಕರಿಗೆ ಮನದಟ್ಟು ಮಾಡಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಛಾಯಾಗ್ರಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತಿಕೆರೆ ಪ್ರದೀಪ್, ಗೌರವಾಧ್ಯಕ್ಷ ಎಂ.ಆರ್.ರಮೇಶ್, ಉಪಾಧ್ಯಕ್ಷ ಪಾರ್ಥ ಸಾರಥಿ, ಖಜಾಂಚಿ ಜಯನಾಯಕ್ ಸಹ ಕಾರ್ಯದರ್ಶಿ ರೇಣುಕುಮಾರ್, ನಿರ್ದೇಶಕರುಗಳಾದ ಹರೀಶ್, ನೀಲಕಂಠ, ರಾಜೇಶ್, ನವೀನ್, ಪ್ರಭು, ಸಂತೋಷ್, ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

Canon cameras are great for photo-videography

 

Share

Leave a comment

Leave a Reply

Your email address will not be published. Required fields are marked *

Don't Miss

ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಧ್ಯೇಯವಾಕ್ಯ ಅನಾವರಣ

ಚಿಕ್ಕಮಗಳೂರು: ಕಾಫಿ ಮಂಡಳಿಯು ದೇಶಕ್ಕೆ ಸ್ವಾತಂತ್ರ್ಯ ದೊರೆತು ೨೦೪೭ಕ್ಕೆ ೧೦೦ ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ `ಏಳು ಬೀಜಗಳಿಂದ ಏಳು ಲಕ್ಷ ಟನ್‌ಗೆ ಭಾರತದ ಕಾಫಿ ಜಿಗಿತ’ ಎಂಬ ಧ್ಯೇಯವಾಕ್ಯವನ್ನು ಹೊಂದಿದೆ ಎಂದು ಮಂಡಳಿಯ...

ನೇಣು ಬಿಗಿದುಕೊಂಡು ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ

ಚಿಕ್ಕಮಗಳೂರು: ನೇಣು ಬಿಗಿದುಕೊಂಡು ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯ ಪೊಲೀಸ್ ಕ್ವಾಟ್ರಸ್‌ನಲ್ಲಿ ಗುರುವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್‌ಟೇಬಲ್ ಕಾಂತರಾಜ್ (೪೫)...

Related Articles

ಗಿರಿಭಾಗಕ್ಕೆ ಪ್ರವೇಶ ಶುಲ್ಕ-ಪಾಸ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮತ್ತು ಐ.ಡಿ.ಪೀಠ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿ ವಾಸಿಗಳಿಗೆ ಪ್ರವೇಶ ಶುಲ್ಕ ಮತ್ತು ಪಾಸ್...

ಭದ್ರಾ ನದಿಯಲ್ಲಿ ಮಗ ಕಣ್ಮರೆ-ಕೆರೆಗೆ ಹಾರಿದ ತಾಯಿ

ಚಿಕ್ಕಮಗಳೂರು: ಯುವಕನೊಬ್ಬ ನಿಯಂತ್ರಣ ತಪ್ಪಿ ಜೀಪ್ ಸಮೇತ ಭದ್ರಾ ನದಿಗೆ ಬಿದ್ದು ಸಾವನ್ನಪ್ಪಿದ್ದು, ಇದರ ವಿಚಾರ...

ಅಮೃತಮಹಲ್ ಕಾವಲ್ ಪ್ರದೇಶದ ಒತ್ತುವರಿ ತೆರವಿಗೆ ಸೂಚನೆ

ಚಿಕ್ಕಮಗಳೂರು: ಜಿಲ್ಲೆಯ ಅಮೃತಮಹಲ್ ಕಾವಲ್‌ನ ಒತ್ತುವರಿ ಪ್ರದೇಶದವನ್ನು ಕೂಡಲೇ ತೆರವುಗೊಳಿಸುವಂತೆ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ...

ಕೊಳಮಗೆ ಬಳಿಯ ಭದ್ರಾ ನದಿಗೆ ಬಿದ್ದ ಪಿಕ್‌ಅಪ್: ಯುವಕ ಸಾವಿನ ಶಂಕೆ

ಕಳಸ: ಕಳಸ-ಕಳಕೋಡು ರಸ್ತೆಯ ಕೊಳಮಗೆ ಬಳಿ ಭದ್ರಾನದಿಗೆ ಗುರುವಾರ ಮಧ್ಯಾಹ್ನ ಪಿಕ್‌ಅಪ್ ವಾಹನ ಬಿದ್ದಿದ್ದು, ಯುವಕನೊಬ್ಬ...