Home namma chikmagalur 127 K.G ಚಿನ್ನದ ಕಳ್ಳಿ ರನ್ಯಾರಾವ್ ಗೆ 102 ಕೋಟಿ ದಂಡ
namma chikmagalurchikamagalurCrime NewsHomeLatest NewsState News

127 K.G ಚಿನ್ನದ ಕಳ್ಳಿ ರನ್ಯಾರಾವ್ ಗೆ 102 ಕೋಟಿ ದಂಡ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಮೂಲದ ಚಿತ್ರನಟಿ ರನ್ಯಾ ರಾವ್ ವಿದೇಶದಿಂದ 127ಕೆ,ಜಿ,ಚಿನ್ನ ಕದ್ದು ತಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ಬಲೆಗೆ ಬಿದ್ದು ಒದ್ದಾಡುತ್ತಿದ್ದಾವಳಿಗೆ ಮತ್ತಷ್ಟು ಸಂಕಟಕ್ಕೆ ಸಿಲುಕಿದ್ದಾಳೆ ಎನ್ನಲಾಗಿದೆ.

ಮೂರು ನಾಲ್ಕು ಚಿತ್ರಗಳಲ್ಲಿ ಕಾಟಚಾರಕ್ಕೆ ನಟಿಸಿರುವ ರನ್ಯಾರಾವ್ ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿ ಕೊಂಡಿರುವ ರಾವ್ ಹಿನ್ನೆಲೆ ಬಿಗ್ ಜೀರೊ . ಚಿಕ್ಕಮಗಳೂರು ಸಮೀಪದ‌ ಕೈಮರದ ಬಳಿ ಇದ್ದ ರೋಹಿಣಿ ಹೆಗಡೆಶ್ ಪುತ್ರಿ ರನ್ಯಾರಾವ್ ಪೊಲೀಸ್ ಅಧಿಕಾರಿಯ ಮಲಮಗಳಾಗಿದ್ದರ ಹಿನ್ನೆಲೆ ರೋಚಕವಾಗಿದೆ.

ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠ ಧಿಕಾರಿಯಾಗಿದ್ದ ರಾಮಚಂದ್ರ ರಾವ್ ರೋಹಿಣಿ ಬಲೆಗೆ ಬಿದ್ದು ಈಗಾ ವಿಲ,ವಿಲ ಎಂದು ಒದ್ದಾಡುವಂತಾಗಿದೆ. ರೋಹಿಣಿ ರೈಫಲ್ ಶೂಟಿಂಗ್ ಕಲಿಯಲು ಹೋದಾಗ ರಾಮಚಂದ್ರ ರಾವ್ ಶೂಟಿಂಗ್ ಶುರುಮಾಡಿಕೊಂಡಿದ್ದರ ಪರಿಣಾಮ ಗಂಡನಿಗೆ ಗುಡ್ ಬೈ ಹೇಳಿ ರಾಮಚಂದ್ರ ರಾವ್ ಪತ್ನಿಯಾಗಿದ್ದು ಇದರಿಂದಾಗಿ ರನ್ಯಾರಾವ್ ಮಲಮಗಳಾಗಿ ಚಿನ್ನ ಕಳ್ಳಿಯಾಗಿದ್ದಾಳೆ.

ಕಲಿತಿರುವುದು ಬಿಡು ಕಳ್ಳಿ ಎಂದರೆ ಕಲಿತಿರುವುದು ಬಿಟ್ಟು ಬಾಯಿಗೆ ಏನು ಮಣ್ಣು ಹಾಕಿಕೊಳ್ಳಲಾ ಎಂದು ಮಗಳನ್ನು ಅಂತರಾಷ್ಟ್ರೀಯ ಚಿನ್ನದ ಕಳ್ಳಿಯಾಗಿ ಶಾಶ್ವತವಾಗಿ ಮಣ್ಣು ತಿನ್ನುವ ಪರಿಸ್ಥಿತಿ ಸೃಷ್ಟಿ ಮಾಡಿಕೊಂಡಿದ್ದಾರೆ. ರಾಮಚಂದ್ರ ರಾವ್ ಇದರಿಂದಾಗಿ ಕಡ್ಡಾಯ ರಜೆಯ ಮೇಲೆ ತೆರಳಿ ಮುಖ ಮುಚ್ಚಿ ಕೊಳ್ಳುವಂತೆ ಮಾಡಿರುವ ಸಮಯದಲ್ಲಿ ಡಿ,ಆರ್,ಐ 102 ಕೋಟಿ ದಂಡ ಹಾಕಿರುವುದರಿಂದ ಮತ್ತಷ್ಟು ಸಂಕಷ್ಟ ಶುರುವಾಗಿದೆ.

ರನ್ಯಾರಾವ್ ಜೊತೆಗೆ ಚಿನ್ನ ಕಳ್ಳ ಸಾಗಾಣಿಕೆ ಆರೋಪದಲ್ಲಿ ಭಾಗಿಯಾಗಿರುವ ಉದ್ಯಮಿ ತರುಣ್ ಕೊಂಡರಾಜ್ ,ಸಾಹಿಲ್ ಸಖಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ಅವರು ಪರಪ್ಪನಹಾರ ಜೈಲಿನಲ್ಲಿ ಇದ್ದಾರೆ .ಇವರುಗಳಿಗೆ ದಂಡ ಕಟ್ಟುವಂತೆ ನೋಟೀಸ್ ನೀಡಲಾಗಿದೆ.

ಒಂದು ವರ್ಷ ಜಾಮೀನು ಪಡೆಯಲು ಸಾಧ್ಯವಿಲ್ಲ. ದಂಡ ಕಟ್ಟಿದರು ಅಪರಾಧ ಪ್ರಕರಣಗಳು ಮುಂದುವರೆಯಲಿವೆ ಎನ್ನಲಾಗಿದೆ. ನೂಲಿನಂತ ಸೀರೆ, ತಾಯಿಯಂತೆ ಮಗಳು ಎಂಬ ಗಾದೆಯಂತೆ ರೋಹಿಣಿ ಮಗಳು ಆಗಿದ್ದು ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದವರಲ್ಲ ಹೀಗಾಗಿ ದಂಡದ ಮೊತ್ತವನ್ನು ಮಲತಂದೆ ರಾಮಚಂದ್ರ ರಾವ್ ಕಟ್ಟಬೇಕು ಎಂದು ಢವ,ಢವ ಶುರುವಾಗಿದೆ .

ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಧಿಕಾರಿಯಾಗಿದ್ದಾಗ ಜಿಲ್ಲಾ ಸಮಾಚಾರ ಪತ್ರಿಕೆಯಲ್ಲಿ ರೋಹಿಣಿ ಮಳೆಗೆ ಗಡ,ಗಡ ಎನ್ನುವ ರಾವ್ ಎಂದು ಬರೆಯಲಾಗಿತ್ತು ಈಗ ಸದಾಕಾಲವೂ ಗಡ,ಗಡ,ಎನ್ನುವಂತಾಗಿದೆ.

102 crores fined for 127 KG gold cactus Ranyarao

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...