Home ಎಸಿಬಿಯವರೆಗೆ ಕರೆಂಟ್ ಕಟ್ – ಇಂಜಿನಿಯರ್ ಕೈ ಕೊಟ್ಟು ಎಸ್ಕೇಪ್ ?
HomechikamagalurLatest Newsnamma chikmagalur

ಎಸಿಬಿಯವರೆಗೆ ಕರೆಂಟ್ ಕಟ್ – ಇಂಜಿನಿಯರ್ ಕೈ ಕೊಟ್ಟು ಎಸ್ಕೇಪ್ ?

Share
Share

ಕಡೂರು: ಮೆಸ್ಕ್ ಮ್ ಇಂಜಿನಿಯರ್ ಮಂಜುನಾಥ್ ಎಸಿಬಿಯವರೆಗೆ ಕರೆಂಟ್ ಕಟ್ ಮಾಡುವ ರೀತಿ ಕಟ್ ಮಾಡಿ ಪರಾರಿಯಾದ ಘಟನೆ ನಡೆದಿದೆ.ಎ.ಇ.ಇ.ಮಂಜುನಾಥ್ ಈ ಹಿಂದೆ ಚಿಕ್ಕಮಗಳೂರಿನಲ್ಲಿ ಡ್ಯೂಟಿ ಮಾಡಬೇಕಾದರೆ ಎಸಿಬಿ ಲೋಕಯುಕ್ತರ ಬಲೆಗೆ ಸಿಕ್ಕಿ ವಿಲ,ವಿಲ ಒದ್ದಾಡಿದವ ಮತ್ತೆ ಲಂಚ ಪಡೆಯುವ ಸಲವಾಗಿ ವಿದ್ಯುತ್ ಕಂಬ ವಿತರಣೆ ಮಾಡುವವರಿಂದ ಹಣ ಪಡೆಯುವ ಪಕ್ಕಾ ಮಾಹಿತಿ ಪಡೆದ ಲೋಕಯುಕ್ತರು ಬಲೆ ಬಿಸಿದಾಗ ಬಲೆಯಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ವರದಿಯಾಗಿದೆ.

ಕತರನಾಕ್ ಮಂಜುನಾಥ್ ಎಲ್ಲಿದ್ದರೂ ಹಣ,ಹಣ ಎಂದು ಕೈ ಒಡ್ಡುವುದು ನಾಲಿಗೆ ಹಾಕಿ ನೆಕ್ಕುವ ಅಭ್ಯಾಸ ಮಾಮೂಲಿ ಯಾಗಿದೆ. ಆದರೆ ಮಂಜುನಾಥ್ ಗೆ ವಿಷಯ ತಿಳಿದು ಪರಾರಿಯಾಗಿರುವುದು ಮಾತ್ರ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಸಿದ್ದಪ್ಪ ಎಂಬ ಗುತ್ತಿಗೆದಾರ ವಿದ್ಯುತ್ ಕಂಬಗಳನ್ನು ಸರಬರಾಜು ಮಾಡಿದ್ದರು ಇದರ ಬಾಪ್ತು 32 ಲಕ್ಷ ರೂಗಳನ್ನು ಗುತ್ತಿಗೆದಾರರಿಗೆ ಕೊಡದೆ ನನಗೆ ಬರಬೇಕಾದ ಹಣ ತಲುಪಿಸು ಎಂಬ ಬೇಡಿಕದ ಇಟ್ಟ ಮಂಜುನಾಥ್ ನ ಬಗ್ಗೆ ಲೋಕಯುಕ್ತದಲ್ಲಿ ದೂರು ದಾಖಲು ಮಾಡಿ ಕಳೆದ ಹದಿನೈದು ದಿನಗಳಿಂದ ಮಂಜುನಾಥ್ ನನ್ನು ಹಿಡಿಯಲು ಶತ ಪ್ರಯತ್ನ ನಡೆಸಿದ ಲೋಕಯುಕ್ತದವರ ಕಣ್ಣ್ ತಪ್ಪಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಸದಾಕಾಲವೂ ಹಣ,ಹಣ,ಹಣ ಬಾಯಿ,ಬಾಯಿ ಬಿಡುವ ಈತ ಕಳೆದ ಐದಾರು ತಿಂಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಲೋಕಯುಕ್ತದವರ ಬಲೆಗೆ ಬಿದ್ದು ಅಮಾನತುಗೊಂಡಿದ್ದನು.ಕೈ ತೊಳೆದುಕೊಂಡು ಇನ್ನೂ ಹಸಿಯಾಗಿರುವಾಗಲೇ ಮತ್ತೆ ಲಂಚ ಪಡೆಯುವ ಇಂತಹ ಖದೀಮನಿಗೆ ಅಯಾಕಟ್ಟಿನ ಹುದ್ದೆ ಕೊಟ್ಟು ಕುಳಿತಿರುವ ಮೆಸ್ಕಾಂಗೆ ಎನೆಂದು ಕರೆಯಬೇಕು.

ಮಂಜುನಾಥ್ ನಿಂದ ಹಲವು ಗುತ್ತಿಗೆದಾರರು ನಲುಗಿ ಹೋಗಿದ್ದಾರೆ ಇನ್ನಾದರೂ ಅಯಾಕಟ್ಟಿನ ಹುದ್ದೆಯನ್ನು ನೀಡದೆ ಇರುವುದು ಒಳ್ಳೆಯದು. ಕೈಲಾಗದ ಮಂತ್ರಿ ಜಾರ್ಜ್‌ ನಂತವರು ಇಲಾಖೆ ನಿರ್ವಹಣೆ ಮಾಡಲಾಗದೆ ಇರುವುದು ಕೂಡ ಇಂತಹ ಲಂಚಬಾಕರಿಗೆ ರಹದಾರಿ ದೊರೆತಂಗೆ ಆಗಿದೆ.

Power cut up to ACB – Engineer gives up and escapes?

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...