Home namma chikmagalur ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಶೇ 77.76 ಮತದಾನ
namma chikmagalurajjampuraHomeLatest News

ಅಜ್ಜಂಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಶೇ 77.76 ಮತದಾನ

Share
Share

ಅಜ್ಜಂಪುರ: ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಭಾನುವಾರ ನಡೆದ ಮೊದಲ ಚುನಾವಣೆಯಲ್ಲಿ ಶೇ 77.76 ಮತದಾನವಾಗಿದೆ.

4,967 ಪುರುಷ ಮತಗಳಲ್ಲಿ 3,916 ಹಾಗೂ 5,285 ಮಹಿಳಾ ಮತಗಳಲ್ಲಿ 4,056 ಮತಗಳು ಚಲಾವಣೆಗೊಂಡವು. ಒಟ್ಟಾರೆ 10,252 ಮತದಾರರಲ್ಲಿ 7,972 ಮತದಾರರು ತಮ್ಮ ಹಕ್ಕು ಚಲಾಯಿಸಿದರು.

1 ನೇ ವಾರ್ಡ್‌ನ ಒಟ್ಟು 876 ಮತಗಳಲ್ಲಿ 628, 2 ನೇ ವಾರ್ಡ್‌ನ 1,529 ಮತಗಳಲ್ಲಿ 1,108, 3ನೇ ವಾರ್ಡ್‌ನ 1,704 ಮತಗಳಲ್ಲಿ 1,313, 4ನೇ ವಾರ್ಡ್‌ನ 788 ಮತಗಳಲ್ಲಿ 595, 5ನೇ ವಾರ್ಡ್‌ನ 791 ಮತಗಳಲ್ಲಿ 630, 6ನೇ ವಾರ್ಡ್‌ನ 761 ಮತಗಳಲ್ಲಿ 658, 7ನೇ ವಾರ್ಡ್‌ನ 789 ಮತಗಳಲ್ಲಿ 643, 8ನೇ ವಾರ್ಡ್‌ನ 505 ಮತಗಳಲ್ಲಿ 442, 9ನೇ ವಾರ್ಡ್‌ನ 467 ಮತಗಳಲ್ಲಿ 430, 10ನೇ ವಾರ್ಡ್‌ನ 855 ಮತಗಳಲ್ಲಿ 662, 11ನೇ ವಾರ್ಡ್‌ನ 1,187 ಮತಗಳಲ್ಲಿ 863 ಮತಗಳು ಚಲಾವಣೆಯಾದವು.

ಬೆಳಗಿನಿಂದಲೇ ಮತದಾರರು ಮತ ಕೇಂದ್ರದತ್ತ ಮುಖ ಮಾಡಿದ್ದರು. 10 ಗಂಟೆಯಿಂದ 3 ಗಂಟೆವರೆಗೆ ಮತದಾನ ಏರುಗತಿ ಪಡೆದಿತ್ತು. ಮತ ಕೇಂದ್ರದಲ್ಲಿ ಸಾಲುಗಟ್ಟಿ ನಿಂತು ಮತದಾನ ಮಾಡಿದರು. ಸಂಜೆ ವೇಳೆಗೆ ಮತದಾನ ಪ್ರಮಾಣ ಕ್ಷೀಣಿಸಿತ್ತು.

ಶೆಟ್ರು ಸಿದ್ದಪ್ಪ ಪದವಿ ಪೂರ್ವ ಕಾಲೇಜು, ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆ, ಸರ್ಕಾರಿ ಉರ್ದು ಶಾಲೆ, ಸರ್ಕಾರಿ ಉತ್ತರ ದಿಕ್ಕಿನ ಶಾಲೆ, ಸರ್ಕಾರಿ ಪೂರ್ವ ದಿಕ್ಕಿನ ಶಾಲೆ ಮತ ಕೇಂದ್ರದ ಬಳಿ ಅಭ್ಯರ್ಥಿಗಳು, ಕಾರ್ಯಕರ್ತರು, ಬೆಂಬಲಿಗರು ಜಮಾಯಿಸಿದ್ದರು. ಮತದಾರರ ಮನವೊಲಿಸಲು ಅಂತಿಮ ಹಂತದವರೆಗೂ ಕಸರತ್ತು ನಡೆಸಿದ್ದು ಕಂಡುಬಂದಿತು.

11 ವಾರ್ಡ್‌ಗಳ 31 ಅಭ್ಯರ್ಥಿಗಳ ಭವಿಷ್ಯಗಳಲ್ಲಿ ಇವಿಎಂಗಳಲ್ಲಿ ಭದ್ರವಾಗಿದ್ದು, ಮತ ಎಣಿಕೆ ಬುಧವಾರ (ಆ.20) ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.

77.76% voter turnout in Ajjampura town panchayat elections

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...