Home namma chikmagalur ಶ್ರಮಿಕರಿಗೆ ಗೌರವ ತಂದ ಜಯಮ್ಮನವರ ಸ್ಮರಣೆ.
namma chikmagalurHomeLatest NewsTarikere

ಶ್ರಮಿಕರಿಗೆ ಗೌರವ ತಂದ ಜಯಮ್ಮನವರ ಸ್ಮರಣೆ.

Share
Share

ತರೀಕೆರೆ: ಜಯಮ್ಮ ಶ್ರೀ ಮಲ್ಲಯ್ಯ ಸೇವಾ ಪ್ರತಿಷ್ಠಾನದ ವತಿಯಿಂದ ಶ್ರೀ ಮತಿ ಜಯಮ್ಮನವರ ಪುಣ್ಯ ಸ್ಮರಣೆ ಕಾರ್ಯಕ್ರಮ ವಿಶಿಷ್ಟ ಮತ್ತು ಅಪರೂಪದಿಂದ ಆಯೋಜಿಸಲಾಗಿತ್ತು.

ತಂದೆ,ತಾಯಿ ಎಂದರೆ ನಿರ್ಲಕ್ಷ್ಯಕ್ಕೆ ಒಳಾಗಾಗುತ್ತಿದ್ದಾರೆ.ಅದರಲ್ಲೂ ವಿದ್ಯಾವಂತರು ಮತ್ತು ಹಣವಂತರು ತಂದೆ ತಾಯಿಯನ್ನು ಮನೆಯಿಂದ ಹೊರಗೆ ತಳ್ಳುವ ಅಥವಾ ವೃದ್ದಾಶ್ರಮಕ್ಕೆ ಸೇರಿಸುವ ಮೂಲಕ ಕನಿಷ್ಠರಾಗುತ್ತಿದ್ದಾರೆ.

ತರೀಕೆರೆ ಮಾಜಿ ಪುರಸಭಾ ಅಧ್ಯಕ್ಷ ಎಂ.ನರೇಂದ್ರ ಕುಟುಂಬದವರು ಜಯಮ್ಮನವರ ಸ್ಮರಣೆಯನ್ನು ಪೌರಸೇವಾ ಸ್ವಚ್ಚತಾ ನೌಕರರು, ಆಸ್ಪತ್ರೆಗಳಲ್ಲಿ ಸ್ವಚ್ಚತೆ ಮಾಡುವ ನೌಕರರು ಮತ್ತು ಬೀದಿಯಲ್ಲಿ ಗಾಡಿಯಲ್ಲಿ ವ್ಯಾಪಾರ ಮಾಡುವವರಿಗೆ ಕಲ್ಯಾಣ ಮಂಟಪದಲ್ಲಿ ಸ್ವಚ್ಚತೆ ಮಾಡುವವರಿಗೆ ಸೊಪ್ಪುಗಳನ್ನು ಮಾರುವ ಮಹಿಳೆಯರಿಗೆ ಬಟ್ಟೆ ಮತ್ತು ಪ್ರೊತ್ಸಾಹ ಧನ ವಿತರಿಸಿದರೆ ಅಂಧಮಕ್ಕಳಿಗೆ ರೇಷನ್ ಮತ್ತು ಬಟ್ಟೆ ವಿತರಿಸಿ ಮಾದರಿಯಾಗಿದ್ದಾರೆ.

ತಂದೆ ತಾಯಿಯ ಮಹತ್ವ ಅರಿಯದೆ ನಿರ್ಲಕ್ಷ್ಯ ಮಾಡಿ ಮನೆಯಿಂದ ಹೊರಗೆ ಹಾಕುವ ರಾಜಕೀಯ ಪುಡಾರಿಗಳ ಜೊತೆಗೆ ಪೋಸ್ಟರ್ ನಲ್ಲಿ ಮಿಂಚುವ ಜನರಿಗೆ ಬರವಿಲ್ಲ.ವೃದ್ಧಾಶ್ರಮಗಳು ನಾಯಿ ಕೊಡೆಗಳಂತೆ ಇರುವಾಗ ಮುದುಕರ ಉಸಬಾರಿ ಏಕೆ ಬೇಕು ಎನ್ನುವವರು ಮುಟ್ಟಿ ನೋಡಿಕೊಳ್ಳುವಂತೆ ತಾಯಿಯ ನೆನಪಿಗಾಗಿ ನೊಂದು ಬೆಂದವರಿಗೆ ಕೈಲಾದಷ್ಟು ನೆರವು ನೀಡಿ ಬೆನ್ನು ತಟ್ಟಿ ಹೊಟ್ಟೆ ತುಂಬಾ ಊಟ ಹಾಕಿದ್ದು ಮಾನವೀಯ ಸಂಬಂಧಗಳನ್ನು ತೆರದಿಟ್ಟಿತು.

ಹಣವಂತರು ವಿದ್ಯಾವಂತ ರು ಇಂತಹ ಕೆಲಸ ಮಾಡಿದರೆ ಸಾರ್ಥಕ ಆದರೆ ಕಾಲ ಕೆಟ್ಟಿದೆ ಎನ್ನವವರ ಮಧ್ಯೆ ಕಾಲ ಕೆಟ್ಟಿಲ್ಲ ಮನುಷ್ಯ ಕೆಟ್ಟದ್ದಾನೆ ಎಂಬುದಕ್ಕೆ ಜಯಮ್ಮನವರ ಸ್ಮರಣ ಕಾರ್ಯಕ್ರಮ ವಿಶಿಷ್ಟವಾಗಿತ್ತು. ಜಯಮ್ಮನವರ ಹೆಸರಿನಲ್ಲೇ “ಜಯ” ವಿದೆ ತುಂಬು ಕುಟುಂಬದ ಹಿರಿಯ ಸೊಸೆ ಬದುಕನ್ನು ಹೇಗೆ ಕಟ್ಟಬೇಕು ಬಂದವರೇಲ್ಲಾ ನನ್ನ ಬಂಧುಗಳು ಎಂದು ಉಪಚರಿಸುತ್ತಿದ್ದ ಮನಸ್ಸು. ಮನೆಗೆ ಯಾರಾದರೂ ಬರಲಿ ನೀರು,ಕಾಫಿ,ಊಟ ಏನಾದರೂ ಮಾಡಲೇ ಬೇಕು ಎಂದು ನಗು ಮುಖದಿಂದ ಹೇಳುತ್ತಿದ್ದರು.

ಮಾತು ಮೃದು ಮನಸ್ಸು ಸ್ವಚ್ಛ ಇಂತಹ ಜಯಮ್ಮ ಜೀವನ ಸಾರ್ಥಕಗೊಳಿಸಲು ಶ್ರಮಿಕರಿಗೆ ಪ್ರೋತ್ಸಾಹ ನೀಡಿದ ಜಾತಿ ಮತ ಬಿಟ್ಟು ಸೇರಿದ್ದ ಜನಸ್ತೋಮ ಸಾಕ್ಷಿಕರಿಸಿತು.ಜಯಮ್ಮನವರಿಗೆ ಒಂದು ಆಸೆ ಇತ್ತು ಮಗ ಮನೆ ಕಟ್ಟಬೇಕು ಎಂದು ಜಯಮ್ಮ ಮಲ್ಲಯ್ಯ ನಿಲಯ ಬೇಗ ನಿರ್ಮಿಸಲಿ ಮತ್ತು ಮತ್ತಷ್ಟು ಆಸಕ್ತರ ನೆರವಿಗೆ ಧೈರ್ಯ ಸ್ಥೈರ್ಯ ಸಿಗಲಿ .

Remembering Jayamma who brought respect to workers

Share

Leave a comment

Leave a Reply

Your email address will not be published. Required fields are marked *

Don't Miss

ಬಿ.ಎಲ್.ಶಂಕರ್ ರ ರಾಜಕೀಯ ಹಪ ಹಪಿಗೆ ಮತ್ತೆ ಮತ್ತೆ ತಣ್ಣೀರು !

ಬಿ.ಎಲ್.ಶಂಕರ್ ಕಾಂಗ್ರೆಸ್ ನ ರಾಜ್ಯ ನಾಯಕರು ನಿಜ,ಆದರೆ ಇವರು ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ನಲ್ಲಿ ಕಡ್ಡಿ ಆಡಿಸುವುದರಲ್ಲಿ ನಿಪುಣ. ಕಾಂಗ್ರೆಸ್ ಸೇರಿ ಎಲ್ಲಾ ಚುನಾವಣೆಯಲ್ಲಿ ಸೋತು ದಾಖಲೆ ಮಾಡಿದ್ದಾರೆ.ಚಿತ್ರಕಲಾ ಪರಿಷತ್ತಗೆ ಗೂಟಾ...

ಪ್ರವಾಸಿಗರ ಟೆಂಪೊ ಟ್ರ್ಯಾವೆಲರ್ ನಿಯಂತ್ರಣ ತಪ್ಪಿ ಪಲ್ಟಿ

ಚಿಕ್ಕಮಗಳೂರು: ಮಂಗಳೂರಿನಿಂದ ಹೊರನಾಡಿಗೆ ಆಗಮಿಸಿದ್ದ ಪ್ರವಾಸಿಗರ ಟೆಂಪೊ ಟ್ರ್ಯಾವೆಲರ್ (ಟಿಟಿ) ವಾಹನ ತಡರಾತ್ರಿ ಹೊರನಾಡು ಸಮೀಪದ ಭಾಮಿ ಅಂಗಡಿ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವಾಹನದಲ್ಲಿದ್ದ ಮೂವರು ಮಕ್ಕಳು ಸೇರಿದಂತೆ...

Related Articles

ಕೆ.ಬಿ.ಎಂಗೆ ಆತ್ಮೀಯ ಅಭಿಮಾನಾರ್ಪಣೆ

ಬೀರೂರ: ಜನಾನುರಾಗಿ ಸೇವೆ ಸಲ್ಲಿಸಿ ಅಜಾತಶತ್ರು ಪಟ್ಟಣದ ಹಿರಿಯ ಮುತ್ಸದಿ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್...

ದೇಶದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಇಲ್ಲ

ಬೀರೂರು: ‘ದೇಶದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಇಲ್ಲದೆ ಮುಂದಿನ ಪೀಳಿಗೆಗೆ ಕೊಡುಗೆಯಾಗುವಂಥ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದು...

ಅಜ್ಜಂಪುರದ ರೈಲ್ವೆ ಲೆವೆಲ್ ಕ್ರಾಸಿಂಗ್ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ

ಚಿಕ್ಕಮಗಳೂರು:  ದೇಶದ ಅಭಿವೃದ್ಧಿಯ ಸಂಕೇತವೇ ರೈಲ್ವೆಯಾಗಿದ್ದು, ರೈಲ್ವೆ ಇಲಾಖೆಯನ್ನು ಎಷ್ಟು ಮಟ್ಟಿಗೆ ಅಭಿವೃದ್ಧಿಪಡಿಸುತ್ತೇವೆಯೋ ಅಷ್ಟು ದೇಶಕ್ಕೆ...

ಗುಡುಗು ಸಿಡಿಲಿನ ಆರ್ಭಟಕ್ಕೆ ಬಸ್ ತಂಗುದಾಣದನಲ್ಲಿದ್ದ ದಂಪತಿ ಗಾಯ

ಎನ್.ಆ‌ರ್.ಪುರ: ಕಾಫಿನಾಡಿನಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಜೋರಾಗಿದ್ದು, ಗುಡುಗು ಸಿಡಿಲಿನ ಆರ್ಭಟಕ್ಕೆ ದಂಪತಿ ಗಾಯಗೊಂಡಿರುವ ಘಟನೆ...