Home namma chikmagalur 127 K.G ಚಿನ್ನದ ಕಳ್ಳಿ ರನ್ಯಾರಾವ್ ಗೆ 102 ಕೋಟಿ ದಂಡ
namma chikmagalurchikamagalurCrime NewsHomeLatest NewsState News

127 K.G ಚಿನ್ನದ ಕಳ್ಳಿ ರನ್ಯಾರಾವ್ ಗೆ 102 ಕೋಟಿ ದಂಡ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಮೂಲದ ಚಿತ್ರನಟಿ ರನ್ಯಾ ರಾವ್ ವಿದೇಶದಿಂದ 127ಕೆ,ಜಿ,ಚಿನ್ನ ಕದ್ದು ತಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ಬಲೆಗೆ ಬಿದ್ದು ಒದ್ದಾಡುತ್ತಿದ್ದಾವಳಿಗೆ ಮತ್ತಷ್ಟು ಸಂಕಟಕ್ಕೆ ಸಿಲುಕಿದ್ದಾಳೆ ಎನ್ನಲಾಗಿದೆ.

ಮೂರು ನಾಲ್ಕು ಚಿತ್ರಗಳಲ್ಲಿ ಕಾಟಚಾರಕ್ಕೆ ನಟಿಸಿರುವ ರನ್ಯಾರಾವ್ ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿ ಕೊಂಡಿರುವ ರಾವ್ ಹಿನ್ನೆಲೆ ಬಿಗ್ ಜೀರೊ . ಚಿಕ್ಕಮಗಳೂರು ಸಮೀಪದ‌ ಕೈಮರದ ಬಳಿ ಇದ್ದ ರೋಹಿಣಿ ಹೆಗಡೆಶ್ ಪುತ್ರಿ ರನ್ಯಾರಾವ್ ಪೊಲೀಸ್ ಅಧಿಕಾರಿಯ ಮಲಮಗಳಾಗಿದ್ದರ ಹಿನ್ನೆಲೆ ರೋಚಕವಾಗಿದೆ.

ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠ ಧಿಕಾರಿಯಾಗಿದ್ದ ರಾಮಚಂದ್ರ ರಾವ್ ರೋಹಿಣಿ ಬಲೆಗೆ ಬಿದ್ದು ಈಗಾ ವಿಲ,ವಿಲ ಎಂದು ಒದ್ದಾಡುವಂತಾಗಿದೆ. ರೋಹಿಣಿ ರೈಫಲ್ ಶೂಟಿಂಗ್ ಕಲಿಯಲು ಹೋದಾಗ ರಾಮಚಂದ್ರ ರಾವ್ ಶೂಟಿಂಗ್ ಶುರುಮಾಡಿಕೊಂಡಿದ್ದರ ಪರಿಣಾಮ ಗಂಡನಿಗೆ ಗುಡ್ ಬೈ ಹೇಳಿ ರಾಮಚಂದ್ರ ರಾವ್ ಪತ್ನಿಯಾಗಿದ್ದು ಇದರಿಂದಾಗಿ ರನ್ಯಾರಾವ್ ಮಲಮಗಳಾಗಿ ಚಿನ್ನ ಕಳ್ಳಿಯಾಗಿದ್ದಾಳೆ.

ಕಲಿತಿರುವುದು ಬಿಡು ಕಳ್ಳಿ ಎಂದರೆ ಕಲಿತಿರುವುದು ಬಿಟ್ಟು ಬಾಯಿಗೆ ಏನು ಮಣ್ಣು ಹಾಕಿಕೊಳ್ಳಲಾ ಎಂದು ಮಗಳನ್ನು ಅಂತರಾಷ್ಟ್ರೀಯ ಚಿನ್ನದ ಕಳ್ಳಿಯಾಗಿ ಶಾಶ್ವತವಾಗಿ ಮಣ್ಣು ತಿನ್ನುವ ಪರಿಸ್ಥಿತಿ ಸೃಷ್ಟಿ ಮಾಡಿಕೊಂಡಿದ್ದಾರೆ. ರಾಮಚಂದ್ರ ರಾವ್ ಇದರಿಂದಾಗಿ ಕಡ್ಡಾಯ ರಜೆಯ ಮೇಲೆ ತೆರಳಿ ಮುಖ ಮುಚ್ಚಿ ಕೊಳ್ಳುವಂತೆ ಮಾಡಿರುವ ಸಮಯದಲ್ಲಿ ಡಿ,ಆರ್,ಐ 102 ಕೋಟಿ ದಂಡ ಹಾಕಿರುವುದರಿಂದ ಮತ್ತಷ್ಟು ಸಂಕಷ್ಟ ಶುರುವಾಗಿದೆ.

ರನ್ಯಾರಾವ್ ಜೊತೆಗೆ ಚಿನ್ನ ಕಳ್ಳ ಸಾಗಾಣಿಕೆ ಆರೋಪದಲ್ಲಿ ಭಾಗಿಯಾಗಿರುವ ಉದ್ಯಮಿ ತರುಣ್ ಕೊಂಡರಾಜ್ ,ಸಾಹಿಲ್ ಸಖಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ಅವರು ಪರಪ್ಪನಹಾರ ಜೈಲಿನಲ್ಲಿ ಇದ್ದಾರೆ .ಇವರುಗಳಿಗೆ ದಂಡ ಕಟ್ಟುವಂತೆ ನೋಟೀಸ್ ನೀಡಲಾಗಿದೆ.

ಒಂದು ವರ್ಷ ಜಾಮೀನು ಪಡೆಯಲು ಸಾಧ್ಯವಿಲ್ಲ. ದಂಡ ಕಟ್ಟಿದರು ಅಪರಾಧ ಪ್ರಕರಣಗಳು ಮುಂದುವರೆಯಲಿವೆ ಎನ್ನಲಾಗಿದೆ. ನೂಲಿನಂತ ಸೀರೆ, ತಾಯಿಯಂತೆ ಮಗಳು ಎಂಬ ಗಾದೆಯಂತೆ ರೋಹಿಣಿ ಮಗಳು ಆಗಿದ್ದು ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದವರಲ್ಲ ಹೀಗಾಗಿ ದಂಡದ ಮೊತ್ತವನ್ನು ಮಲತಂದೆ ರಾಮಚಂದ್ರ ರಾವ್ ಕಟ್ಟಬೇಕು ಎಂದು ಢವ,ಢವ ಶುರುವಾಗಿದೆ .

ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಧಿಕಾರಿಯಾಗಿದ್ದಾಗ ಜಿಲ್ಲಾ ಸಮಾಚಾರ ಪತ್ರಿಕೆಯಲ್ಲಿ ರೋಹಿಣಿ ಮಳೆಗೆ ಗಡ,ಗಡ ಎನ್ನುವ ರಾವ್ ಎಂದು ಬರೆಯಲಾಗಿತ್ತು ಈಗ ಸದಾಕಾಲವೂ ಗಡ,ಗಡ,ಎನ್ನುವಂತಾಗಿದೆ.

102 crores fined for 127 KG gold cactus Ranyarao

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಮಳೆಯ ಆರ್ಭಟ – ಕಾಫಿಬೆಳೆ ನಾಶ – ರಸ್ತೆ ಹುಡುಕಾಡುವ ಕಾಟ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿದೆ ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಮಳೆಯ ಆರ್ಭಟದಿಂದ ಕಾಫಿ ಕೊಳೆಯಲು ಆರಂಭವಾಗಿದೆ ಎಂದು ಕಾಫಿ ಬೆಳೆಗಾರರ...

12ನೇ ಶತಮಾನದಲ್ಲೇ ಕನ್ನಡಕ್ಕೆ ವಚನಾಕಾರಿಂದ ಬಹಳ ದೊಡ್ಡ ಕೊಡುಗೆ

ಚಿಕ್ಕಮಗಳೂರು: ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು ೧೨ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರು ಕೊಟ್ಟ ಸಾಂಸ್ಕೃತಿಕ ಚಳುವಳಿ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ...

Related Articles

ದೊಡ್ಡ ಮನೆ ಡಿಚ್ಚಿ ಯಾರಿಗೆ – ಕೈ ಕಸರತ್ತು ? ಬಿಜೆಪಿಯಲ್ಲಿ ತಳಮಳ !

ಅಜ್ಜಂಪುರ: ಪಟ್ಟಣ ಪಂಚಾಯತಿ ಚುನಾವಣೆ ನಡೆದು ಇಪ್ಪತ್ತು ದಿನಗಳಾಗಿದೆ ಆದರೆ ಅಧ್ಯಕ್ಷ/ ಉಪಾಧ್ಯಕ್ಷರ ಚುನಾವಣೆ ವಿಳಂಬ...

ಜನರಿಗೆ ವಾಸ್ತವ ಸಂಗತಿ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾದ್ಯಂತ ಪ್ರವಾಸ

ಚಿಕ್ಕಮಗಳೂರು : ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ನೀಡುತ್ತಿರುವ ಜನಪರ ಯೋಜನೆಗಳ ಪ್ರಚಾರ ಕೈಗೊಳ್ಳುವುದರೊಂದಿಗೆ ವಿರೋಧ...

ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು

ಚಿಕ್ಕಮಗಳೂರು: ‘ಅಲ್ಲಂಪುರ ನಿವಾಸಿ ಓಂಕಾರಮೂರ್ತಿ ಮೇಲಿನ ಹಲ್ಲೆ ಸಂಬಂಧ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ‘ಬಿ’...

ಅಂಬೇಡ್ಕರ್ ಸಂವಿಧಾನದ ತತ್ವ ಹೊಂದಿರುವ ಪಕ್ಷ ಕಾಂಗ್ರೆಸ್

ಚಿಕ್ಕಮಗಳೂರು:  ಅಂಬೇಡ್ಕರ್ ಸಂವಿಧಾನದ ತತ್ವವನ್ನು ಹೊಂದಿರುವ ಪಕ್ಷ ಕಾಂ ಗ್ರೆಸ್. ಚುನಾವಣೆಗೆ ಮಾತ್ರ ಪಕ್ಷ ಸೀಮಿತವಾಗದೇ...