Home namma chikmagalur 127 K.G ಚಿನ್ನದ ಕಳ್ಳಿ ರನ್ಯಾರಾವ್ ಗೆ 102 ಕೋಟಿ ದಂಡ
namma chikmagalurchikamagalurCrime NewsHomeLatest NewsState News

127 K.G ಚಿನ್ನದ ಕಳ್ಳಿ ರನ್ಯಾರಾವ್ ಗೆ 102 ಕೋಟಿ ದಂಡ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಮೂಲದ ಚಿತ್ರನಟಿ ರನ್ಯಾ ರಾವ್ ವಿದೇಶದಿಂದ 127ಕೆ,ಜಿ,ಚಿನ್ನ ಕದ್ದು ತಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ಬಲೆಗೆ ಬಿದ್ದು ಒದ್ದಾಡುತ್ತಿದ್ದಾವಳಿಗೆ ಮತ್ತಷ್ಟು ಸಂಕಟಕ್ಕೆ ಸಿಲುಕಿದ್ದಾಳೆ ಎನ್ನಲಾಗಿದೆ.

ಮೂರು ನಾಲ್ಕು ಚಿತ್ರಗಳಲ್ಲಿ ಕಾಟಚಾರಕ್ಕೆ ನಟಿಸಿರುವ ರನ್ಯಾರಾವ್ ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿ ಕೊಂಡಿರುವ ರಾವ್ ಹಿನ್ನೆಲೆ ಬಿಗ್ ಜೀರೊ . ಚಿಕ್ಕಮಗಳೂರು ಸಮೀಪದ‌ ಕೈಮರದ ಬಳಿ ಇದ್ದ ರೋಹಿಣಿ ಹೆಗಡೆಶ್ ಪುತ್ರಿ ರನ್ಯಾರಾವ್ ಪೊಲೀಸ್ ಅಧಿಕಾರಿಯ ಮಲಮಗಳಾಗಿದ್ದರ ಹಿನ್ನೆಲೆ ರೋಚಕವಾಗಿದೆ.

ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠ ಧಿಕಾರಿಯಾಗಿದ್ದ ರಾಮಚಂದ್ರ ರಾವ್ ರೋಹಿಣಿ ಬಲೆಗೆ ಬಿದ್ದು ಈಗಾ ವಿಲ,ವಿಲ ಎಂದು ಒದ್ದಾಡುವಂತಾಗಿದೆ. ರೋಹಿಣಿ ರೈಫಲ್ ಶೂಟಿಂಗ್ ಕಲಿಯಲು ಹೋದಾಗ ರಾಮಚಂದ್ರ ರಾವ್ ಶೂಟಿಂಗ್ ಶುರುಮಾಡಿಕೊಂಡಿದ್ದರ ಪರಿಣಾಮ ಗಂಡನಿಗೆ ಗುಡ್ ಬೈ ಹೇಳಿ ರಾಮಚಂದ್ರ ರಾವ್ ಪತ್ನಿಯಾಗಿದ್ದು ಇದರಿಂದಾಗಿ ರನ್ಯಾರಾವ್ ಮಲಮಗಳಾಗಿ ಚಿನ್ನ ಕಳ್ಳಿಯಾಗಿದ್ದಾಳೆ.

ಕಲಿತಿರುವುದು ಬಿಡು ಕಳ್ಳಿ ಎಂದರೆ ಕಲಿತಿರುವುದು ಬಿಟ್ಟು ಬಾಯಿಗೆ ಏನು ಮಣ್ಣು ಹಾಕಿಕೊಳ್ಳಲಾ ಎಂದು ಮಗಳನ್ನು ಅಂತರಾಷ್ಟ್ರೀಯ ಚಿನ್ನದ ಕಳ್ಳಿಯಾಗಿ ಶಾಶ್ವತವಾಗಿ ಮಣ್ಣು ತಿನ್ನುವ ಪರಿಸ್ಥಿತಿ ಸೃಷ್ಟಿ ಮಾಡಿಕೊಂಡಿದ್ದಾರೆ. ರಾಮಚಂದ್ರ ರಾವ್ ಇದರಿಂದಾಗಿ ಕಡ್ಡಾಯ ರಜೆಯ ಮೇಲೆ ತೆರಳಿ ಮುಖ ಮುಚ್ಚಿ ಕೊಳ್ಳುವಂತೆ ಮಾಡಿರುವ ಸಮಯದಲ್ಲಿ ಡಿ,ಆರ್,ಐ 102 ಕೋಟಿ ದಂಡ ಹಾಕಿರುವುದರಿಂದ ಮತ್ತಷ್ಟು ಸಂಕಷ್ಟ ಶುರುವಾಗಿದೆ.

ರನ್ಯಾರಾವ್ ಜೊತೆಗೆ ಚಿನ್ನ ಕಳ್ಳ ಸಾಗಾಣಿಕೆ ಆರೋಪದಲ್ಲಿ ಭಾಗಿಯಾಗಿರುವ ಉದ್ಯಮಿ ತರುಣ್ ಕೊಂಡರಾಜ್ ,ಸಾಹಿಲ್ ಸಖಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ಅವರು ಪರಪ್ಪನಹಾರ ಜೈಲಿನಲ್ಲಿ ಇದ್ದಾರೆ .ಇವರುಗಳಿಗೆ ದಂಡ ಕಟ್ಟುವಂತೆ ನೋಟೀಸ್ ನೀಡಲಾಗಿದೆ.

ಒಂದು ವರ್ಷ ಜಾಮೀನು ಪಡೆಯಲು ಸಾಧ್ಯವಿಲ್ಲ. ದಂಡ ಕಟ್ಟಿದರು ಅಪರಾಧ ಪ್ರಕರಣಗಳು ಮುಂದುವರೆಯಲಿವೆ ಎನ್ನಲಾಗಿದೆ. ನೂಲಿನಂತ ಸೀರೆ, ತಾಯಿಯಂತೆ ಮಗಳು ಎಂಬ ಗಾದೆಯಂತೆ ರೋಹಿಣಿ ಮಗಳು ಆಗಿದ್ದು ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದವರಲ್ಲ ಹೀಗಾಗಿ ದಂಡದ ಮೊತ್ತವನ್ನು ಮಲತಂದೆ ರಾಮಚಂದ್ರ ರಾವ್ ಕಟ್ಟಬೇಕು ಎಂದು ಢವ,ಢವ ಶುರುವಾಗಿದೆ .

ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಧಿಕಾರಿಯಾಗಿದ್ದಾಗ ಜಿಲ್ಲಾ ಸಮಾಚಾರ ಪತ್ರಿಕೆಯಲ್ಲಿ ರೋಹಿಣಿ ಮಳೆಗೆ ಗಡ,ಗಡ ಎನ್ನುವ ರಾವ್ ಎಂದು ಬರೆಯಲಾಗಿತ್ತು ಈಗ ಸದಾಕಾಲವೂ ಗಡ,ಗಡ,ಎನ್ನುವಂತಾಗಿದೆ.

102 crores fined for 127 KG gold cactus Ranyarao

Share

Leave a comment

Leave a Reply

Your email address will not be published. Required fields are marked *

Don't Miss

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು. ಜಿ.ಪಂ.ನ ಅಬ್ದುಲ್...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ...

Related Articles

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...

ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಹಲ್ಲೆ

ಮೂಡಿಗೆರೆ:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ...

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 25ಕ್ಕೂ ಹೆಚ್ಚುಕಡೆ ಬೆಂಕಿ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು  ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ...

3.50 ಕೋಟಿ ರೂ ವೆಚ್ಚದ ವಿವಿಧ ರಸ್ತೆಗಳ ಲೋಕಾರ್ಪಣೆ

ಚಿಕ್ಕಮಗಳೂರು:  ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ...